ವ್ಯಸನಕೋಣೆ

ವ್ಯಸನಕೋಣೆಯಲಿ ನಮ್ಮ ಕಥಾನಾಯಕಿ ಬಿಳಿಯ
ವಸನಧಾರಿ ಮಲಗಿರುವಳಂತೆ ಯಾರಿಗೂ ತಿಳಿಯ-
ದವಳ ಬೇಸರದ ಮೂಲ

ಘನ ಸರಕಾರವೇನೂ ಸುಮ್ಮನೆ ಕೂತಿಲ್ಲ ಕೈಕಟ್ಟಿ
ಮನೆಯ ಸುತ್ತಲೂ ನಿಲ್ಲಿಸಿದೆ ಕಾವಲಿಗೆಂದು ಗಟ್ಟಿ
ಗೂಢಚಾರರ ಜಾಲ

ಸುಮ್ಮನೆ ಓಡಾಡುವವರ ಮೇಲೆ ಕಣ್ಣಿರಿಸಿ
ಗುಮಾನಿ ಬಂದವರ ಜೇಬುಗಳನರಸಿ
ತಿರುಗಾಡುವರು ಗಸ್ತು

ಸಮಸ್ಯೆಗಳ ಮೂಲಗಳ ಹುಡುಕಬಲ್ಲಂತಹ
ವಿಮರ್ಶಕ ಬುದ್ಧಿಜೀವಿಗಳ ವರ್ಗ ಸಹ
ಆಗಿಬಿಟ್ಟಿದೆ ಸುಸ್ತು

ಮಾಯವಾಗಿರುವರೆಷ್ಟೋ ಜನ ಇದ್ದಕಿದ್ದಂತೆ
ಸಾಯದೆಯೆ ಉಳಿದವರಿಂದ ತುಂಬಿರುವುದಂತೆ
ದೇಶದ ಬಂದೀಖಾನೆ

ಅದರೊಂದಿಗೇ ಹುಟ್ಟಿಕೊಳ್ಳುವುದು ಭೂಗತ ಸಾಹಿತ್ಯ
ಸದೆಬಡಿತ ಸರ್ವಾಧಿಕಾರ ನಿರಂಕುಶತ್ವ ಅಸತ್ಯ
ಸಾಹಿತಿಗಳಿಗೆ ಸ್ಫೂರ್ತಿ ತಾನೆ!

ಇತ್ತ ನಾಯಕಿಯೂ ಬದುಕಿಲ್ಲ ಎಷ್ಟೋ ದಿನಗಳ ಕೆಳಗೆ
ಸತ್ತು ಹೋದಳು ಎಂದು ಕಿವಿಯಿಂದ ಕಿವಿಗೆ
ಹಬ್ಬಿರುವುದು ವದಂತಿ

ತೆರೆಸಿ ನೊಡುವುದಕ್ಕೆ ಸರ್ವಥಾ ಒಪ್ಪುವುದಿಲ್ಲ
ಸರಕಾರ-ಎಲ್ಲ ಸರ್ವಾಧಿಕಾರದ ಹಿಂದೆಯೂ ಒಂದಲ್ಲ
ಒಂದು ಭಯಂಕರ ಭ್ರಾಂತಿ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿವಿನ ವಾಟೆ
Next post ಸುಖ

ಸಣ್ಣ ಕತೆ

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys